ಮಂತ್ರಿ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ, ಸಾಯಿಕಿರಣ್ ಮುಕ್ಕಮಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ‘ಅವಧಿ’ ಚಿತದ ಪ್ರಥಮ ಪ್ರತಿ ಸಿದ್ಧವಾಗಿದೆ. ಆ ದೇವರು ಮನುಷ್ಯನ ಜೀವನದಲ್ಲಿ ಹುಟ್ಟು ಸಾವಿನ ನಡುವೆ ಹೇಗೆ ಆಟವಾಡುತ್ತಾನೆ ಎಂಬುದನ್ನು ಚಲನಚಿತ್ರವೊಂದರ ಮೂಲಕ ನಿರ್ದೇಶಕ ಸಾಯಿಕಿರಣ್ ಹೇಳಹೊರಟಿದ್ದಾರೆ. ಈ ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು ಚಿತ್ರದ ಪ್ರಥಮ ಪ್ರತಿ ಹೊರಬಂದಿದೆ.
ಚಿತ್ರಕ್ಕೆ ಸುರೇಶ್ ಗೊಂಟ್ಲ ಛಾಯಾಗ್ರಹಣ, ಸಾಬು ವರ್ಗಿಸ್ ಸಂಗೀತ, ಅರಸು ಅಂತಾರೆ ಸಾಹಿತ್ಯ, ರಾಮ್ ಸುಂಕರ ಸಾಹಸ, ರಮೇಶ್ ಕೆ ಸಂಕಲನವಿದೆ. ತಾರಬಳಗದಲ್ಲಿ ರಂಜಿತ್, ಅರ್ಚನಾ, ರಮೇಶ್ ಭಟ್, ಮಂಜುನಾಥ್, ಜೈಜಗದೀಶ್, ಶ್ರೀನಿವಾಸ್ ಪ್ರಭು, ಸುಚಿತ್ರಾ ಇನ್ನು ಮುಂತಾದವರು ಅಭಿನಯಿಸಿದ್ದಾರೆ.